ನನ್ನ ತಂದೆ

ಎಲ್ಲರಂತಿರಲಿಲ್ಲ ನನ್ನ ತಂದೆ
ಹೆಣ್ಣ ಕರುಳ ಗಂಡು ಜೀವ
ಮಕ್ಕಳೆಂದರೆ ಅವಗೆ
ಮರಳು ಮಾಯೆ

ಗುರಿಯ ತತ್ವದ ತಿಳಿಸಿ
ದಿಟ್ಟತನವನು ಕಲಿಸಿ
ಬದುಕು ಚಾತುರ್ಯ
ಬೆರೆಸಿ ಬೆಳಸಿದನು

ಪುಟ್ಟ ಕೈಗಳ ಹಿಡಿದು
ಭರವಸೆಯ ಒತ್ತಿದನು
ಬಾಳ ಹಾದಿಯ ಸವಿಸೋ
ಧೈರ್ಯವನು ತುಂಬಿ

ಆ ಹೊತ್ತು ಮುಂಜಾನೆ ನೀ ಅಗಲಿದೆ ದಿನ
ಕೈಯ ಚಾಲೋಟ ತುಟಿಯೇರುವ
ಮುನ್ನ ಹೇಳದೆ ನಡೆದೆ
ಹಂಗು ತೊರೆದು

‘ಬಾ ಮಗನೇ’ ಎನ್ನಲು
ನೀನಿಲ್ಲವೆಂದಾಗ ಅನಿಸಿದ್ದು
ಮರೀಚಿಕೆ ಈ ಬದುಕು
ಮರಳು ಮಾಯೆ

ಅತ್ತು ಉರುಳಾಡಿ
ಗುಣಗಾನಗೈಯುತಿರೆ
ನೆಂಟರಿಷ್ಟರು ಕೂಡಿ
ಮತ್ತು ಸಂತೈಕೆ ಮಾಡಿ

ತಂದೆ ಇಲ್ಲದ ಮನೆಯು
ಗುರುವು ಇಲ್ಲದ ಮಠವು
ಕೊನೆಯಿಲ್ಲದಾಯ್ತು
ನಮ್ಮ ನೋವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಟಿದೇಳುವ ರಾಗದುಸಿರ
Next post ಉಸ್ಮಾನ್ ಸಾಗರದ ದಂಡೆಯಿಂದ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys